ಮೂಢಾಯಣ ಚಿತ್ರೀಕರಣ ಮುಕ್ತಾಯ
Posted date: 26 Thu, May 2016 – 10:10:48 AM

ಭೂಮಿಕಾ ಆರ್ಟ್ಸ್ ಮೈಸೂರು ಲಾಂಛನದಲ್ಲಿ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಡಾ|| ಡಿ.ಎ. ಉಪಾಧ್ಯ,  ರವರ ಮೂಢಾಯಣ  ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಛಾಯಾಗ್ರಹಣ- ಚಂದ್ರಶೇಖರ್, ಸಹನಿರ್ದೇಶನ- ರುದ್ರೇಶ್, ಸಂಗೀತ - ಹರೀಶ್ ಕುಮಾರ್, ಸಂಕಲನ-ಡಾ|| ಡಿ.ಎ. ಉಪಾಧ್ಯ, ಕಲೆ-ಮಂಜು, ನಿರ್ವಹಣ್ - ಎಸ್.ಎನ್. ಪಾಟೀಲ್,  ಸಮಾಜಕ್ಕೆ ಶಾಪವಾಗಿರುವ, ಮೂಡನಂಬಿಕೆ ವಿರುದ್ಧ ಒಬ್ಬ ಬಾಲಕ ಹೋರಾಡುತ್ತಾನೆ.  ಅವನು ತನ್ನ ಗ್ರಾಮದಲ್ಲಿರುವ ಅನೇಕ ಮೂಢ ನಂಬಿಕೆಗಳ ಕುರಿತು ಅವುಗಳ ಭಯಾನಕತೆಯ ಬಗ್ಗೆ ಜನರಿಗೆ ತಿಳುವಳಿಕೆ ಹೇಳುತ್ತಾನೆ. ಹಾಗೆ ತಿಳುವಳಿಕೆ ಹೇಳುವಾಗ ಪ್ರಾಯೋಗಿಕವಾಗಿ  ಮೂಢನಂಬಿಕೆಯ ಅವೈಜ್ಞಾನಿಕ ನೆಲೆಗಳನ್ನು ವಿವರಿಸುತ್ತಾನೆ.  ಮೂಢನಂಬಿಕೆಯ ಆಚರಣೆಗಳಿಂದ ಸಂಭವಿಸಬಹುದಾದ ನಷ್ಟಗಳನ್ನು ತೋರಿಸಿಕೊಡುತ್ತಾನೆ.  ಇಂತಹ ಹತ್ತಾರು ಮೂಢನಂಭಿಕೆಯ ಹಿನ್ನೆಲೆಗಳನ್ನು ಸದಾ ವಿವರಿಸುತ್ತಾ ಹಳ್ಳಿಗರ ಮನಗಳನ್ನು  ಹೇಗೆ ಗೆಲ್ಲುತ್ತಾನೆ ಎಂಬ ಸಾರಾಂಶವುಳ್ಳ ಈ ಚಿತ್ರದಲ್ಲಿ ಮಾ|| ಮನು, ಮಂಡ್ಯ ರಮೇಶ್, ಕಲ್ಯಾಣಿ, ಜೂ.ನರಸಿಂಹರಾಜು, ಭವ್ಯಶ್ರೀರೈ, ಐಶ್ವರ್ಯ, ನಾ.ಶ್ರೀನಿವಾಸ್, ಪಿ.ಎ. ಉಪಾಧ್ಯ, ಎ. ಮಹಾಲಿಂಗಪ್ಪ, ಎಂ.ಎಸ್. ಚಿನ್ಮೂರು, ಮುಂತಾದವರಿದ್ದಾರೆ.  ಗದಗ, ರೋಣ, ಅಬ್ಬಿಗೆರೆ, ಬಾಗಲಕೋಟೆ, ಬಾದಾಮಿಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed